Wednesday, April 8, 2020


ಹುಳಿ ಹಿಂಡುವ ಮುಳ್ಳು ಗೋಗು :
ಹೊಸ ತಲೆಮಾರಿನ  ಅಡುಗೆ  ಪ್ರವೀಣ/ಣೆಯರು ತರಹೇವಾರಿ ಅಡುಗೆಯನ್ನು ಮಾಡಬಲ್ಲರು.ಆದರೆ  ನಮ್ಮ ಮುತ್ತಜ್ಜಿ ಹಿರಿಯರ ಕಾಲದವರು  ತಯಾರಿಸುತ್ತಿದ್ದ ಅಡುಗೆ ಪಾಕಗಳ ಹಿಂದೆ ಅತ್ಯಂತ  ಆರೋಗ್ಯಕರ ಹಾಗೂ ವೈಜ್ಞಾನಿಕ ಹಿನ್ನಲೆಯಿತ್ತು.ಅಡುಗೆಗೆ ಸಂಬಧಿಸಿದ ಅದೆಷ್ಟೋ ಸರಳ ಸೂತ್ರಗಳು ಈಗಾಗಲೇ ನಶಿಸಿ ಹೋಗಿವೆ.ಹಳೆಯ ಕಾಲದ ಪಾಕ ಪುಸ್ತಕಗಳನ್ನು ಓದಿದರೆ ನಮ್ಮ ಭಾರತದಅಡುಗೆ ಪದ್ದತಿಗಳು ಎಷ್ಟು ಗುಣ ಮಟ್ಟದ್ದಾಗಿದ್ದವು ಎಂದು ತಿಳಿಯಬಹುದು. 
ಅಂದ ಹಾಗೆ ಹುಳಿ ಹಿಂಡದ  ಯಾವುದಾದರೂ ಮನೆಗಳಿವೆಯೇ?! ತಪ್ಪು ತಿಳಿಯಬೇಡಿ..
ದಿನ ನಿತ್ಯದ ಅಡುಗೆಯಲ್ಲಿ ಹುಳಿಯ ಬಳಕೆ ಇದ್ದೇ ಇದೆ.ಈಗ ಎಪ್ರಿಲ್ ತಿಂಗಳು  ಹುಣಸೆ ಹುಳಿ ಸೀಸನ್ ಬೇರೆ.  ಕಿಲೋ ಒಂದಕ್ಕೆ 300 ವರೆಗೆ ತೆತ್ತಾದರೂ ಒಳ್ಳೆ ಹುಳಿ ಸ್ವಲ್ಪ ಸಿಕ್ಕರೆ ಸಾಕು ಎಂಬುದು ಅಡುಗೆ ಪ್ರಿಯರ ಅಂಬೋಣ.
ಏನಾದರೂ ಸರಿ "ಕೇನೆ ಕರಿ" ಗೆ ಹುಳಿನೀರು ಬೇಕೇ ಬೇಕು.ಕೇನೆ ಹೋಳುಮಾಡುವಾಗಲೇ ಕೈ ತುರಿ ಆರಂಭ.ಹೋಳನ್ನು ಬೇಯಿಸಿದ ನೀರನ್ನು ಚೆಲ್ಲಿ ಪುನಹ ಹುಣಸೆ ಹುಳಿ ಕಿವುಚಿದ ನೀರಿನಲ್ಲೂ ಬೇಯಿಸಿದಾಗಲೇ ಈ ಕಿರಿ ಕಿರಿಗೆ ಮುಕ್ತಿ.ಇದಕ್ಕೆ ಹುಣಸೆ ಹುಳಿ ಅಲ್ಲದೇ ಬೇರೆ ಉಪಾಯವೂ ಇದೆ ನಮ್ಮ ಹಿರಿಯರ ಕೈಯಲ್ಲಿ !!. 

ಸುವರ್ಣ ಗಡ್ಡೆ/ಕೇನೆ


Hibiscus surattensis ಅಥವಾ ಮುಳ್ಳು ಗೋಗನ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.ದಾಸವಾಳ ಕುಟುಂಬವಾದ Malvaceae ಗೆ ಸೇರಿದ ಕಾಟುಪುಳಿಕ್ಕಾಯ್ ಎಂದೇ ಕೇರಳೀಯರು ಕರೆಯುವ ಹುಳಿ ಸೊಪ್ಪಿನ ಗಿಡ. ಗಿಡ ತುಂಬಾ ಸಣ್ಣ ಮುಳ್ಳುಗಳಿರುವ ಬಳ್ಳಿಯಾಗುವ ಪೊದೆ ಸಸ್ಯ.ಹಳದಿ ದಳದ ಮದ್ಯೆ ಕೆಂಬಣ್ಣದ ಬೊಟ್ಟು ಇರುವ ದಾಸವಾಳದಂತಹ ಹೂವು ನೋಡಲು ಚಂದ.ಸಾಧಾರಣವಾಗಿ ತೋಟದ ಅಂಚಿನಲ್ಲಿ,ಬೇಲಿ ಬದಿಯಲ್ಲಿ ಕಾಣಸಿಗುವ ಇದನ್ನು ಕಳೆಯೆಂದು ಬುಡಸಮೇತ ಕೀಳದಿರಿ.
ಹಲವಾರು ಒಷಧೀಯ ಗುಣಗಳಿರುವ ಸಸ್ಯವಿದು.ನಮ್ಮ ಉಪಯೋಗಕ್ಕೆ ಹೇಳುವುದಾದರೆ ಸುವರ್ಣ ಗಡ್ಡೆ ಹೋಳುಗಳನ್ನು ಬೇಯಿಸುವಾಗ ಅದಕ್ಕೆ ಒಂದುಹಿಡಿ ಮುಳ್ಳು  ಗೋಗನ ಎಲೆಗಳನ್ನು ಜಜ್ಜಿ ರಸ ಹಿಂಡಬೇಕು (ಎಲೆಗಳ ಸಂಖ್ಯೆ ಹೋಳುಗಳಿಗೆ ಅನುಸಾರವಾಗಿ).ಎಂತಹ ನಾಲಿಗೆ ತುರಿಕೆ ತರುವ ಕೇನೆಯಾದರೂ ಸರಿ ಈ ಹುಳಿ ಹಿಂಡಿದರೆ ಸಾಕು.ಹೂ ದಳದ ಗೊಜ್ಜು  ಕೂಡಾ ಬೆಳ್ಳುಳ್ಳಿ ಒಗ್ಗರಣೆಯೊಂದಿಗೆ ಊಟಕ್ಕೆ ಹಿತ.
ನಿಮ್ಮನೆ ಹಿತ್ತಲಿನ ಮೂಲೆಯಲ್ಲಿ ಈ ಕಾಡುಗೋಗ ಇದ್ದರೆ ಅದರ  ಉಪಯೋಗವನ್ನರಿಯಿರಿ. ಹೊಲದ ಸ್ಥಳಾವಕಾಶವಿದ್ದರೆ ಒಂದೆರಡು ಬೀಜ ತಂದು ಬಿತ್ತಿರಿ.
ಮುಳ್ಳು ಗೋಗು

























Wednesday, April 1, 2020

Conserve & Consume


Since I am a Botany teacher, Most often I disuss about edible wild plants avaible in our locality with my students.I can make out one thing that technology is changing our relationship with nature as we know it.For many indigenous peoples, the contributions of wild edible plants go well beyond nourishment; they are often also used as  part of culture,medicines etc. Historical and contemporary processes of land grabbing, monoculture of crops, acculturation, and lifestyle changes may erode the transmission of plant knowledge to new generations. However, younger generations are not learning about ecofriendly concepts of living,  what their ancestors had. The lack of access to forests,ignorance the formal school regime,modern generation parental care are the main factors interrupting the transmission of knowledge.Yes this is the high time for you to take up green challenges.Teach your kids to recognise local plants,birds and insects.

THIS IS NOT AN ARGUMENT OR HYPOTHESIS.Hygenic Organic life style is part of Indian culture.But please avoid high use of pesticides,insectides to be obessed with artificial sanitized environment just to maintain your lawn grass or to stop ants marathon.

As part of this Challenge/need/passion for Coexistance with nature, I here by introducing a recipe of Tambuli.Thambuli is a type of Raita eaten in the Indian state of Karnataka. Thambuli, being a curd based cuisine, is consumed with rice. Tambuli is derived from Kannada word thampu. (ತಂಪು+ಹುಳಿ ---->ತಂಬುಳಿ).I have added tender leaves of seven wild species for this - Holigarna (Causes Allergic reactions in some therfore dont collect),Mango,Cashew,Syzigium,Guava,Ixora,Careya.

handfull of leaves boiled with water.After 5 minutes grind boiled leaves with a cup of grated coconut .Add a cup of buttermilk+pinch of salt and boil.For tempering use Garlic.

Collection of wild edibles
Thambuli to beat the heat

Sunday, June 23, 2019


«©üõÀt£À ªÉÆzÀ® ¸ÀA±ÉÆMzsÀ£É:
£ÀªÀÄUÉ ªÀÄUÀ ºÀÄnÖzÁUÀ DvÀ£À ºÉ¸ÀgÀÄ aPÀÌzÁV ¸ÀgÀ¼ÀªÁVgÀ° JAzÀÄ "«¨sÀÄ" CAvÀ ªÉÆzÀ® £ÁªÀÄ¥ÀzÀ ªÁVAiÀÄÆ,JgÀqÀ£ÉAiÀÄ G¥À£ÁªÀĪÁV "±ÀªÀÄð" JAzÀÆ PÀgÉzɪÀÅ.DzÀgÉ PÉÆAqÁlzÀ ªÀiÁtÂAiÀÄ£ÀÄß £ÁªÉà §Æ§,©§Ä CAvÀ gÁUÀ J¼ÉzÀÄ PÀgÉzÀgÉ,£ÉgÉ PÀgÉ AiÀÄ CdÓA¢gÀÄ "«©üõÀt"£ÉAzÀÄ PÀgÉAiÀÄvÉÆqÀVzÀÝgÀÄ.¸ÀºÀ¥ÁpUÀ½UÉ "¨sÉƵÀt" £ÁzÀ EªÀ, 6gÀgÀ ¥ÉÆÃgÀÀ £À£Àß eÉÆvÉ  ¸ÀA±ÉÆNzsÀ£ÉUÉ,¸ÀªÉÄäüÀ£ÀPÉÌ CAvÀ ºÉÆÃV EªÀvÀÄÛ C®àªÁV Qæ«Ä-QÃlUÀ¼À£ÀÆß, PÉ® ¸À¸ÀåUÀ¼À£ÀÆß,¥ÁætÂUÀ¼À£ÀÆß UÀÄgÀÄw¸À§®è.EªÀ£À F D¸ÀQÛ ¨É¼ÉzÀÄ ºÉªÀÄägÀªÁUÀ° ªÀÄÄAzÉ ¥Àj¸ÀgÀ ¸ÀAgÀPÀìPÀ£ÁUÀ° JAzÉà D²¸ÀĪÀ £ÁtÄ(£Á-£Á£ÀÄ,tÄ-ªÉÃtÄ).EªÀvÀÄÛ £À£Àß ªÀÄUÀ ªÀiÁrzÀ ªÉÆzÀ® ¥Àj¸ÀgÀzÀ ¸ÀA±ÉÆNzsÀ£É AiÉÄà F ¯ÉÃR£ÀzÀ DvÀä.
ªÀļÉUÁ® DgÀA¨sÀªÁVzÉ.E£ÉßãÀÄ J¯Éè®Æè fêÀ PÀ¼É.¤ªÀÄä ªÀÄ£É ¸ÀÄvÀÛ EgÀĪÀ fêÀ ¸ÀAZÁjUÀ¼À£ÀÄß UÀªÀĤ¹.»wÛ¯Éà ¨ÉÃqÀªÉAzÀÄ vÀ£Àß ºÉ¸ÀjUÉ ¸ÉÃjzÀ £É®PÉÌ (PÀPÀ̸ÀzÀ UÀÄAr MAzÀÄ ©lÄÖ) PÀ®ÄèUÁgÉ ºÁQ¹zÀgÀÆ ªÀļÉUÁ®zÀ°è ºÀoÀPÉÌ ©zÀÝAvÉ £ÉʸÁV ¨É¼ÉAiÀÄĪÀ ¥Áa ¸À¸ÀåUÀ¼À ¯ÉÆÃPÀªÉà MAzÀÄ ¨ÉgÀUÀÄ.£À£Àß ZÀÆnAiÀÄÄ° ¸ÁzsÀ£ÀzÉÆA¢UÉ PÀAqÀzÀÝ£Éß®è QèQ̸ÀĪÀ ªÀÄUÀgÁAiÀÄ,EAzÀÄ £À£Àß ¸ÀªÁ°£ÀAvÉ MAzÀÄ ¥ÉÆæeÉPïÖ ªÀiÁrAiÉÄà ©lÖ.



MAzÀÄ ¥ÀĸÀÛPÀzÀ°è vÀ£ÀUÉ UÉÆwÛzÀÝ QÃlUÀ¼À£ÀÄß ºÉ¸Àj¹zÀ.£À£Àß ¸ÀºÁAiÀĪÀÇ ¸Àé®à ªÀÄnÖUÉ EvÀÄÛ.EªÀvÀÄÛ MAzÀÄ UÀAmÉ ºÉÆvÀÄÛ ªÀiÁvÀæ ªÀiÁrzÀ F UÀtw PÁAiÀÄðPÀæªÀÄzÀ°è £ÀªÀÄä£É ¸ÀÄvÀÛ E£ÀÄß PÀÆqÀ £Á£ÉAzÀÆ £ÉÆÃrgÀzÀ fëUÀ¼À ¥ÀvÉÛ ªÀiÁrzɪÀÅ.¥Àj¸ÀgÀzÀ ¥ÁoÀ §UÉzÀµÀÄÖ gÉÆÃZÀPÀ...DzÀÝjAzÀ E°èAzÀ ¸ÀÄgÀĪÁUÀ°zÉ £À«Ääà ªÀÄ£É ¥ÁoÀ...¤ÃªÀÅ PÀÆqÁ ¨ÁVAiÀiÁV...
Millipedes are a group of arthropods that are characterised by having two pairs of jointed legs on most body segments; they are known scientifically as the class Diplopoda.
kannada: chorate

 



Saturday, March 5, 2016

ಚಿನ್ನದ ಅಕ್ಕಿ - Golden rice

                                               
ಅಮೆರಿಕದ ಯು.ಎಸ್.ಪಿ.ಟಿ.ಒ ಸಂಸ್ಥೆಯು ಇತ್ತೀಚೆಗೆ ಚಿನ್ನದ ಅಕ್ಕಿ ಅಂದರೆ ""ಗೋಲ್ಡನ್ ರೈಸ್" ಎಂಬ ಯೋಜನೆಗೆ ಒಂದು ಮಾನವೀತೆಯ ಪ್ರಶಸ್ತಿ (ಪೇಟೆಂಟ್ಸ್ ಫೊರ್ ಹ್ಯುಮಾನಿಟಿ") ಯನ್ನು ನೀಡಿತು.ಇದು ಹಸಿವನ್ನು ನೀಗಿಸುವ ಸಂಶೋಧನೆಗೆ ಸಂದ ಪುರಸ್ಕಾರ.ಅಂತರ ರಾಷ್ಟೃ ಮಟ್ಟದಲ್ಲಿ ಬಡವರಿಗೆ ಉಪಯೋಗವಾಗುವ ವಿನೂತನ ಯೋಜನೆಗಳಿಗೆ ಈ ಪುರಸ್ಕಾರ ಸಿಗುವುದು."

ಏನಿದು ಚಿನ್ನದ ಅಕ್ಕಿ?
golden rice v/s common rice
ಡಫೋಡಿಲ್ ಎಂಬ ಹಳದಿ ಹೂವುಗಳ ಗಿಡದಂದ ತೆಗೆದ ಜೀನು(ವಂಶವಾಹಿ)ಗಳನ್ನು ಭತ್ತದ ಗಿಡದ ಜೀನುಗಳೊಂದಿಗೆ ಸೇರಿಸಿ ಪಡೆದ ತಳಿಯೇ ಚಿನ್ನದ ಅಕ್ಕಿ. ಎರ್ವಿನಿಯಾ ಬ್ಯಾಕ್ಟೀರಿಯಾ (ಮಣ್ಣಿನಲ್ಲಿರುವ ಏಕಕೋಶ ಜೀವಿ) ಅಥವಾ ಹರಿವೆ ಗಿಡ ಹೀಗೆ ಪ್ರಕೃತಿ ಯಲ್ಲಿ ದೊರೆಯುವ ಯಾವುದೇ ಜೀವ ವೇವಿಧ್ಯಗಳನ್ನು ಉಪಯೋಗಿಸಿ ಕುಲಾಂತರಿ ಗಿಡಗಳನ್ನು ಸೃಷ್ಟಿಸಬಹುದು.ಬೀಟಾ ಕೆರೋಟಿನ್ ಎಂಬ ದೇಹಕ್ಕೆ ಉಪಯುಕ್ತವಾದ ಧಾತುವನ್ನು ಹೀಗೆ ಜಗತ್ತಿನ ಮುಖ್ಯ ಬೆಳೆಯಲ್ಲಿ ಬೆಳೆದರೆ ಉಪಕಾರವಾದೀತು ಎಂಬ ಯೋಚನೆಯ ಫಲವೇ ಚಿನ್ನದ ಅಕ್ಕಿ.ಅಮೇರಿಕದ ಪ್ರಯೋಗಾಲಯದಲ್ಲಿ ಹುಟ್ಟಿ ನಿಧಾನವಾಗಿ ಭಾರತದಲ್ಲಿ ಬೇರೂರಲು ಹೊರಟಿರುವ ಈ ತಳಿಯ ಬಗ್ಗೆ ಎಲ್ಲರಿಗೂ ಗೊತ್ತಿರಲೇಬೇಕಾದ ಅವಶ್ಯಕತೆಯಿದೆ.

ಉಪಯೋಗಗಳು:
ವಿಟಮಿನ್ ಎ ಯನ್ನು ಹೇರಳವಾಗಿ ಎಲ್ಲರಿಗೂ ದೊರೆಯುವಂತೆ ಮಾಡಬಹುದು.ಇದರಂದ ನಿಶಾಂಧತೆಯನ್ನು ನಿವಾರಿಸಬಹುದು.


ದುರುಪಯೋಗಗಳು:
  • ಕ್ರೋಸ್ ಪೋಲಿನೇಶನ್ ಆಗಬಹುದು.ಅಂದರೆ ಕುಲಾ0ತರಿ ತಳಿಯು ಊರತಳಿಯೊಂದಿಗೆ ಸಂಕರಗೊಂಡು ತಳಿಗಳ   ಕಲಬೆರಕೆಯಾಗಬಹುದು.
  •  ಜೆನೆಟಿಕ್ ಇರೋಶನ್ ಅಂದರೆ ತರ-ತರದ ದೇಶಿ ತಳಿಗಳ ನಿಮರ್ೂಲನೆಯಾಗಿ ಮುಂದಿನ ಪೀಳಿಗೆಗೆ ದೋರಕುವ ಜೀವ ವೈವಿಧ್ಯತೆ ನಾಶವಾಗಬಹುದು.
- ವಿಟಮಿನ್ ದೊರಕಲು ಎಷ್ಟೊಂದು ವಿಧದ ಹಣ್ಣು,ತರಕಾರಿಗಳಿವೆ.ಅವುಗಳನ್ನು ಹೆಚ್ಚು ಬೆಳಿಸಿದರಾಯಿತು.
ಆಹಾರ ಕ್ರಾಂತಿ ಸೃಷ್ಟಿಸಿದರೆ ವಿಜ್ನಾನಿಗಳಿಗೆ ಪ್ರಶಸ್ತಿಗಳ ಸುರಿಮಳೆಯಾದೀತು...ಉದ್ದೇಶವು ಒಳ್ಳೆಯದಿರಬಹುದು..ಆದರೆ ಪ್ರಕೃತಿಯ ಮಡಿಲನ್ನು ಬರಿದು ಮಾಡಿದರೆ ಮತ್ತೆ ಮರುಸೃಷ್ಟಿಸಲು ದೇಸೀ ತಳಿ ಸಂಪತ್ತು ನಮ್ಮ ಜೊತೆಗಿರುವುದೇ?

Sunday, February 28, 2016

ಸಂಶೋಧನೆಯ ಹೆಜ್ಜೆಗಳು...ಅಂಬೆಗಾಲು-2

2010 ಮಾಚರ್್ ತಿಂಗಳಿನಲ್ಲಿ  ಸ್ನಾತಕೋತ್ತರ ಪರೀಕ್ಷೆಗಳು ಮುಗಿದ ಹೊತ್ತಿಗೆ ನನಗೊಂದು ಬೇಸಿಗೆ ಸಂಶೋಧನೆಯ ಚೆಂದದ ಅವಕಾಶ ದೊರಕಿತು. ಡಾ.ರಾಘವೇಂದ್ರ ರಾವ್ ಎಂಬ ಸಸ್ಯ ತಜ್ಞರ ಬಳಿ ಸಸ್ಯ ವರ್ಗಇಕರಣ ಶಾಸ್ತೃ ಕಲಿಯುವ ಸುವರ್ಣ ಅವಕಾಶ. ಬೆಂಗಳೂರಿನಲ್ಲಿರುವ ಭಾರತೀಯ ಓéಷಧ ಮತ್ತು ಪರಿಮಳ ಸಸ್ಯಗಳ ಸಂಶೋಧನಾ ಸಂಸ್ಥೆಯಲ್ಲಿ 2 ತಿಂಗಳು ಕಲಿತದ್ದೇ ಹೆಚ್ಚು.  ಆ ಚಿಕ್ಕ ಚೊಕ್ಕ ಸಮಯಾವಕಾಶವೇ ನಾನು ಸಂಶೋಧನೆಯಲ್ಲಿ ಬೇರೂರಲು ಸಹಾಯ ಮಾಡಿದು.್ದ

Dr.R.R Rao
ಮೊದಲ ದಿನ 5-6-2010 ರಂದು 10.30 ಕ್ಕೆ ನಾನು ಆ ವಿಜ್ಷಾನಿಯನ್ನು ಭೇಟಿಯಾಗಲು ಹೋದಾಗ ತುಂತುರು ಮಳೆ ಸುರಿಯುತ್ತಿತ್ತು. ಮೂಲೆ ಛೇಂಬರಿನಿಂದ ದೊಡ್ಡ ಸ್ವರವೊಂದು ಹಿಂದಿ,ಕನ್ನಡ,ಆಂಗ್ಲ ಭಾಷೆಗಳ ಮಿಶ್ರಣದಲ್ಲಿ ಯಾರದ್ದೋ ಬೆವರಿಳಿಸುತ್ತಿದ್ದುದು ಗೊತ್ತಾಗುತ್ತಿತ್ತು. ಬಾಗಿಲ ಬಳಿ ಹೋಗಿ ವಿಚಾರಿಸಿದರೆ ಅವರೇ ನನ್ನ ಗೈಡ್. ಅವಕಾಶ ದೊರಕಿದ್ದೇ ನನಗೆ ಗತ್ತು ಬಂದಿತ್ತು.ಆದರೆ ಇಲ್ಲಿ ನಾನೇನೂ ಅಲ್ಲ ಅಂತ ಕೆಲವೇ ನಿಮಿಷದಲ್ಲಿ ಮನದಟ್ಟಾಗಿತ್ತು. "ನರಪೇತಲನಂತೆ ಇದ್ದಿ ಏನು ಮಾಡೋದು ಇಲ್ಲಿ"...... ಏನೋ ಬರೆಯುತ್ತಾ, ತನ್ನ ಪಿ.ಎ ಗೆ ಏನೋ ಗದರುತ್ತಾ ರಾವ್ ಸರ್ ಓರೆಗಣ್ಣಲ್ಲಿ ನನ್ನನ್ನೂ ಗಮನಿಸುತ್ತಿದುದು ನನಗೆ ಗೊತ್ತಾಗಿರಲಿಲ್ಲ. ಅಕ್ಕ ತೆಗೆಸಿಕೊಟ್ಟಿದ್ದ ಆ ಹೊಸ ಚೂಡಿದಾರದಲ್ಲೂ ನಾನು ಜೋಕರ್ ಥರ ಕಾಣಿಸುತ್ತಿದ್ದೆ!. "ಸಣ್ಣ ಕೊಠಡಿಯಿದು ನನ್ನ ಎದುರುಗಡೆ ಕುಚರ್ಿಯಲ್ಲಿ ಕೂರು" ಅಂಥ ಹೇಳಿ ಅಷ್ಟೇ ವೇಗದಲ್ಲಿ ನಾನು ಮಾಡಬೇಕಾದ ಕೆಲಸ,ಬೇಕಾದ ಶಿಸ್ತು ಎಲ್ಲವನ್ನೂ ಹೇಳಿ ಸರ ಸರ ಹೊರ ಹೋಗಿ ಬರೇ 5 ನಿಮಿಷ ದಲ್ಲಿ 10 ಗಿಡಗಳೊಂದಿಗೆ ಮರಳಿ ಬಂದು 5 ನಿಮಿಷದಲ್ಲಿ ನಾನು ಆ ಗಿಡಗಳ ಗುಣ ವಿಷೇಶಗಳನ್ನು ಹೇಳಬೇಕಂಬ ಆಜ್ಞೆ. ದಡ ಬಡ ಹೇಳಿ ನನಗೆ ಗೊತ್ತಿದ್ದ ಗಿಮಿಕ್ ಗಳನ್ನೆಲ್ಲಾ ಪ್ರಯೋಗಿಸಿದೆ.ಮತ್ತೆ ಅವರು ಆ ದಿನ ನನ್ನ ಮಾತನಾಡಿಸಲೇ ಇಲ್ಲ. ಸಂಜೆ 5ಕ್ಕೆ ನಾನು ಗೀಚಿದ್ದರ  ನೋಡಿದ ಸರ್ ಹೇಳಿದ್ದು. "ಅಛ್ಛ..........ಛಲೇಗಾ.. ಕಲ್ ಆಓ...ಯು ವಿಲ್ ಡು ಸಂಮ್ಥಿಂಗ್.. ಐ ಯಾಮ್ ಶುವರ್". ಮರುದಿನ ದಿಂದ ನಾನು ಹೆಚ್ಚು ಶ್ರದ್ಧೆ ವಹಿಸಿ ಕೆಲಸ ಮಾಡತೊಡಗಿದ್ದೆ. "ಒಲಿಯಾ ಡೈಯೊಕಾ" ಎಂಬ ಮಲ್ಲಿಗೆ ಕುಟುಂಬದ ಮರ ಪ್ರಭೇದವೊಂದು ನನಗೆ ಬಹಳ ಕೆಲಸ ಹಿಡಿಸಿತ್ತು. 2 ಕೇಸರ, ವಿರುಧ್ಧ ಎಲೆಗಳು ಇಷ್ಟೇ ಸಾಕು ಇದರ ಜಾಡು ಹಿಡಿಯಲು.ಸರ್ ಹೇಳಿ ಕೊಟ್ಟ ಇಂತಹ ಸೂತ್ರಗಳೆೆ ಸಸ್ಯಗಳನ್ನು ಹೆಸರಿಸಲು ನನಗೆ ಇಂದು ಸಹಕಾರಿ. ಆಪರೂಪದ ಈ ಕಲೆಯನ್ನು ನನಗೆ 2 ತಿಂಗಳಲ್ಲಿ ಧಾರೆ ಎರೆದ ಈ ಜ್ಞಾನಿಯನ್ನು ಎಂದೂ ಮರೆಯಲಾಗದು.

OLEA DIOICA Roxb. In flower

OLEA DIOICA In fruit

Saturday, February 13, 2016

ಸಂಶೋಧನೆಯ ಹೆಜ್ಜೆಗಳು...ಅಂಬೆಗಾಲು-1

ನನ್ನ ಬದುಕಿಗೆ ಹೊಸ ಆಯಾಮವನ್ನು ಕೊಟದ್ದ್ಟು ಸಂಶೋದನೆ ಅಂದರೆ ಪಿ.ಹಚ್.ಡಿ ರಿಸರ್ಚ್.ಇಲ್ಲಿ ನಾನು ಬಹಳ ಕಲಿತದ್ದಿದೆ.ನನ್ನನ್ನು ತಿದ್ದಿ,ಬದುಕಲು ಕಲಿಸುತ್ತಿರುವುದು ಇದೇ ಸಂ-ಶೋಧನೆ.
ಸಂಶೋಧನೆ ಮಾಡ ಬಯಸುವ ಪ್ರತಿಯೊಬ್ಬರಿಗೂ ಈ ಬರಹಗಳಿಂದ ಉಪಕಾರವಾಗದೀತು.ಸಂಶೋಧಕ/ಕಿ ಯರು ಬದುಕನ್ನ ಎಷ್ಟರ ಮಟ್ಟಿಗೆ ಪ್ರೀತಿಸಬಲ್ಲರು ಅಥವಾ ದೃಷ್ಟಿಕೋನ ಹೇಗಿರಬಹುದು, ಸಂಶೋಧನೆ ಅಂದರೆ ಏನೆಂದು ಈ ಲೇಖನಗಳಿಂದ ತಿಳಿಸುವ ಪ್ರಯತ್ನವಿದು.ಪ್ರತಿಯೊಬ್ಬ ಮಗುವಿನಲ್ಲೂ ಹುಟ್ಟುವ ಸಂಶೋಧಕ ವರ್ಷಗಳು ಉರುಳಿದಂತೆ ಸಂಶೊಧನೆ ಅಳಿದು ಸಂದೇಹಗಳೆ ತುಂಬಿರುತ್ತವೆ.ಇಂದಿನ ಸ್ಪರ್ಧಾತ್ಮಕ ಜಗತ್ತು ಎಷ್ಟು ಗೊಂದಲಗಳನ್ನು ಸೃಷ್ಟಿಸಿದೆಯೋ ಅಷ್ಟೆ ಅವಕಾಶಗಳನ್ನೂ ನೀಡಿದೆ. 99 ಶೇಕಡ ಪರಿಶ್ರಮ ಪಟ್ಟರೆ 1 ಶೇಕಡ ಅದೃಷ್ಟ ಒಟ್ಟಿಗಿರುತ್ತದೆ ಆದರೆ ಗುರಿ ಸ್ಪಷ್ಟವಾಗಿರಬೇಕು.ಹೆಣ್ಣಿಗೆ ಮಿತಿಗಳನ್ನು ಮೀರದೆ ಸಾಧಿಸುವಷ್ಟೆ ಅವಕಾಶ ಆದರೆ ಗಂಡಿಗೆ (ಹೆಚ್ಚಾಗಿ) ಅಂತಹ ಗೊಂದಲ ಬೇಕಿಲ್ಲ.ನನ್ನಲ್ಲಿ ಏನದರೂ ಸಾಧಿಸು ಅನ್ನುವ ಛಲ ಹುಟ್ಟಿಸಿದ್ದು ನನ್ನ ತಪ್ಪುಗಳು, ಸೋಲುಗಳು, ದೌರ್ಬಲ್ಯಗಳು ಹಾಗೂ ನನಗಾದ ಅವಮಾನಗಳು.
ಇಂದು ನಾನು ಸಸ್ಯ ಸಂಶೋಧನಾ ಕ್ಷೇತ್ರ ದಲ್ಲಿ ಬೇರೂರುವ ಭರವಸೆಯಲ್ಲಿದ್ದೇನೆ.
ಕೆಲವೊಮ್ಮೆ ನಗಿಸುವ,ಅಳಿಸುವ ಅಥವಾ ಹುಚ್ಚು ಹಿಡಿಸುವ "ಸಂಶೋಧನ' ಮಾಡಿದವರಿಗೆ ಗೊತ್ತು ಅದರ ಗತ್ತು. ನಾನು ಸಸ್ಯ ಶಾಸ್ತ್ರ ವರ್ಗೀಕರಣದಲ್ಲಿ ಸಂಶೋಧನೆಯನ್ನು ಮಾಡುತ್ತಿದ್ದೇನೆ. ನವಿರಾದ ಹಾಸ್ಯ ಸನ್ನಿವೇಶಗಳು, ಗಂಭೀರ ವಿಷಯಗಳು ಕೂಡಾ ಹಾದು ಹೋಗುವ ನನ್ನೀ ನೆಚ್ಚಿನ ಹಾದಿಯನ್ನು ನೀವೂ ತಿಳಿಯಿರಿ.


Tuesday, April 2, 2013

ಮುಪ್ಪು ಮತ್ತು ಟೀಲೋಮಿಯರ್ ಟೊಪ್ಪಿ


ಶೈಶವ,ಬಾಲ್ಯ,ತಾರುಣ್ಯ,ವೃಧ್ಧಾಪ್ಯ ಎಂಬುದು ಬದುಕಿನ ಹಂತಗಳು.ಆದರೆ ವೃಧ್ಧಾಪ್ಯ ವನ್ನು ಸಂತಸದಿಂದ ಸ್ವೀಕರಿಸುವ ಮಂದಿ ಬೆರಳೆಣಿಕೆ ಯಷ್ಟಿರಬಹೂದೇನೋ!. ಏನೆಲ್ಲಾ ಕಸರತ್ತುಗಳನ್ನು ಮಾಡಿಯಾದರೂ ಸುಕ್ಕುಗಟ್ಟುತ್ತಿರುವ ಚರ್ಮವನ್ನು ನಯವಾಗಿಸಿ ಮುಪ್ಪನ್ನು ಮರೆಮಾಚುವ ಚಲನಚಿತ್ರತಾರೆಯರು,ರೂಪದರ್ಶಿಗಳು ಈಗ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಬೊಟೋಕ್ಸ್‌ ಚುಚ್ಚುಮದ್ದನ್ನು ಕಣ್ಣಿನ ಕಪ್ಪು ವರ್ತುಲ ಚರ್ಮಕ್ಕೋ ಅಥವಾ ಹಣೆ ಭಾಗಕ್ಕೆ ಚುಚ್ಚುವ ಮೂಲಕ ನೆರಿಗೆ ಮೂಡಿದ ಚರ್ಮವನ್ನು ತಾರುಣ್ಯ ಹಾಗೂ ಕಾಂತಿಯಿಂದ ಕಾಣುವಂತೆ ಮಾಡಲಾಗುತ್ತದೆ.

Chlostridium botulinum bacter
 ಇಲ್ಲಿ ಬೊಟೋಕ್ಸ್ ಮದ್ದು ಹೇಗೆ ತಯಾರಿಸಲಾಗುತ್ತದೆ ಎಂದರೆ, ಎಂಬ ಬ್ಯಾಕ್ಟೀರಿಯಾದಿಂದ ತೆಗೆದ(ನ್ಯೂರೋಟಾಕ್ಸಿನ್‌))))೦) ಸತ್ವವನ್ನು ಹದಮಾಡಿ ಬಹಳ ಅಲ್ಪ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತದೆ.ಈ ಮದ್ದು ಮುಖ ಚರ್ಮದ ನರಕೋಶಗಳ ತುದಿಯಲ್ಲಿರುವ ಅಸಿಟೈಲ್ಕೋಲಿನ್ ಎಂಬ ದ್ರವಕ್ಕೆ ಸೇರಿಕೊಂಡು ಒಂದು ನರಕೋಶ ದಿಂದ ಇನ್ನೊಂದು ನರ ಕೋಶಕ್ಕೆ ರವಾನೆಯಗುವ ಸಂದೇಶಗಳನ್ನು ತಡೆಹಿಡಿಯುತ್ತದೆ.ಹೀಗೆ ಮಿದುಳಿನಿಂದ ಸಾಗಿಬಂದ  ಯಾವುದೇ ಮಾಹಿತಿ ಲಭ್ಯವಾಗದ ಹಿನ್ನಲೆಯಲ್ಲಿ ಮುಖದ ನರಗಳು ಸಮ್ಮನಿದ್ದುಬಿಡುತ್ತವೆ.ಇಲ್ಲಿಗೆ ಚರ್ಮದ ಮುಪ್ಪಾಗುವಿಕೆ ಎಂಬ ಪ್ರಕ್ರಿಯೆಗೆ  ತಾತ್ಕಾಲಿಕವಾಗಿ  ತಡೆಹಿಡಿದಂತಾಯಿತು.ಬೊಟೋಕ್ಸ್ ಮದ್ದು ವಿಪರೀತ ತಲೆನೋವಿಗೆ(ಮೈಗ್ರೇನ್) ಕೂಡಾ ಉಪಯೋಗಿಸುತ್ತಾರೆ.ಆದರೆ ಚರ್ಮದ ಅಂದಕ್ಕಾಗಿ ಇದರ ಬಳಕೆ ಹೆಚ್ಚಾದರೆ ತಂಬಾ ಅಡ್ಡಪರಿಣಾಮಗಳೂ ಇವೆ.


       ಹೀಗೆ, ಎಷ್ಟೇ ಹೆಣಗಿದರೂ ಮುಪ್ಪು ಎನ್ನುವುದು ಯಾರನ್ನೂ ಬಿಡದೆ ಎಲ್ಲರಿಗೂ ಬಂದೇ ಬರುವುದಕ್ಕೆ ಒಂದು ಮೂಲ ಕಾರಣವಿರಬೇಕು ಅಲ್ಲವೇ? ಇಲ್ಲಿ ಬಹಳ ಸಂಕೀರ್ಣವಾಗಿ ನಮ್ಮ ಜೀನುಗಳ ಮಟ್ಟಕ್ಕಿಳಿದು ವಿವರಣೆ ನೀಡಬೇಕಾಗಿದೆ.ಆದರೂ ವಿಷಯವನ್ನು ಸರಳವಾಗಿಸಲು ಪ್ರಯತ್ನಿಸುತ್ತೇನೆ.

   ತಾಯಿಯಿಂದ ಮತ್ತು  ತಂದೆಯಿಂದ ದೊರೆತ ತಲಾ 23 ಕ್ರೋಮೋಸೋಮುಗಳು  ಸೇರಿ 46 ಕ್ರೋಮೋಸೋಮುಗಳು ಒಂದು ಆರೋಗ್ಯ ಮಗುವಿನಲ್ಲಿ ಇರಬೇಕು.ಅನುವಂಶಿಕ ಗುಣಗಳು ಹಾಗೂ ವಿಭಿನ್ನತೆಗೆ ಕಾರಣವಾಗುವ ಈ ಅತಿ ಸೂಕ್ಷ್ಮರೂಪದ ಕ್ರೋಮೋಸೋಮುಗಳ ತುದಿಗಳಲ್ಲಿರುವ ಟೀಲೋಮಿಯರ್ ಟೊಪ್ಪಿಗಳೇ ಪ್ರಾಯವಗುವಿಕೆಯನ್ನು ಸೂಚಿಸುವ ಮೂಲ ಪ್ರತಿನಿಧಿಗಳು. ಈ ಟೊಪ್ಪಿಗಳ ಕೆಲಸವೆಂದರೆ ಕ್ರೋಮೋಸೋಮುಗಳು ಒಂದಕ್ಕೊಂದು ಅಂಟುವುದನ್ನ ತಡೆಯುವುದು ಮತ್ತು ಕ್ರೋಮೋಸೋಮುಗಳ ಶಿಥಿಲವಾಗುವಿಕೆಯನ್ನು ತಡೆಯುವುದು.

chromosomes with telomere
ಕಾಲ ಸರಿದಂತೆ ಟೀಲೋಮಿಯರ್ ಟೊಪ್ಪಿಗಳು ಕೂಡಾ ಶಿಥಿಲವಾಗಲು ತೊಡಗಿದಂತೆ (ನಮ್ಮ ಮೂಲ ಘಟಕವಾದ ಕ್ರೋಮೋಸೋಮುಗಳು ನಿಧಾನವಾಗಿ ಸವೆದಂತೆ) ನಮ್ಮ ಶರೀರದಲೂ ್ಲಬದಲಾವಣೆ ಯಾಗುತ್ತಿರುತ್ತದೆ. ಕೋಶ ವಿಭಜನೆ,ಕೋಶಗಳ ಸಾಯುವಿಕೆ ಇತ್ಯಾದಿ.
  ಮನುಷ್ಯರು  ಸರಾಸರಿ 70 ರಿಂದ 80 ವರ್ಷ ಬದುಕಬಹುದು.ಹಾಗಾಗಿ ಇಲ್ಲಿ ಹೇಳಿದ ಪ್ರಕ್ರಿಯೆ ಕೂಡಾ ತುಂಬಾ ನಿಧಾನ ಗತಿಯಲ್ಲಿಯೇ ಇರುತ್ತದೆ.
 ವಿಜ್ಞಾನಿಗಳು ಇದರ ಬಗ್ಗೆ ಅಧ್ಯಯನ ನಡೆಸುತ್ತಲೇ ಇದ್ದಾರೆ.ಆದರೂ ಪ್ರಕೃತಿಯ ನಿಯಮಕ್ಕೆ ವಿರುಧ್ಧವಾಗಿ ನಡೆಯಲು ನಮಗೆ ಎಂದಿಗೂ ಸಾಧ್ಯವಾಗದು